|
ಬಿಲ್ಲವ ಅಸೋಸಿಯೇಶನ್ ಬೆಂಗಳೂರು
ಇದರ ವತಿಯಿಂದ ಮಂಗಳೂರಿನಲ್ಲಿ ವಧು-ವರಾನ್ವೇಷಣೆ

09.05.10
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಳದ ಆಡಳಿತ ಮಂಡಳಿ ಸಹಯೋಗದೊಂದಿಗೆ ಬಿಲ್ಲವ
ಅಸೋಸಿಯೇಶನ್ ಬೆಂಗಳೂರು ಇವರಿಂದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ
ಸಭಾಭವನದಲ್ಲಿ ಮೇ 9ರ ಭಾನುವಾರ ಬೆಳಿಗ್ಗೆ ಸುಮಾರು 488 ಜೋಡಿಗಳ ವಧು- ವರಾನ್ವೇಷಣಾ ಸಮಾವೇಶ
ನಡೆಯಿತು.

ಸಮಾವೇಶದ ಉದ್ಘಾಟನೆಯನ್ನು ದೀಪಾ ಕಂಪರ್ಟ್ಸ್ ಇದರ
ಪಾಲುದಾರರಾದಂತಹ ಉರ್ಮಿಳಾ ರಮೇಶ್ ದೀಪ ಬೆಳಗುವುದರ ಮೂಲಕ ಆರಂಭಿಸಿದರು.
ಬಳಿಕ ಮಾತನಾಡಿದ ಅವರು ವಧು-ವರಾನ್ವೇಷಣೆಯಲ್ಲಿ
ಪಾಲ್ಗೊಳ್ಳುವ ಎಲ್ಲಾ ಜೋಡಿಗಳಿಗೆ ಹಾಗೂ ಹೆತ್ತವರಿಗೆ ಶುಭ ಹಾರೈಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಕುದ್ರೋಳಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ಸಾಯಿಕುಮಾರ್
ವಹಿಸಿದ್ದರು.
ಮುಖ್ಯ ಅಥಿತಿಗಳಾದ ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ
ಅದ್ಯಕ್ಷರಾದ ಎಂ.ವೇದಕುಮಾರ್ ಮಾತನಾಡಿ ಬಿಲ್ಲವ ಸಮಾಜದಲ್ಲಿರುವ ಕಡು ಬಡವರಿಂದ ಹಿಡಿದು ಉನ್ನತ
ವಿದ್ಯಾಭ್ಯಾಸ ವಿರುವ ಜೋಡಿಗಳು ಮಂಗಳೂರಿನ ಈ ಸಮಾವೇಷದಲ್ಲಿ ಪಾಲ್ಗೊಂಡಿರುವು ಸಂತೋಷ ತಂದಿದೆ
ಎಂದು ಅವರು ಹೇಳಿದರು.

ಸಮಾವೇಷದ ವೇದಿಕೆಯಲ್ಲಿ ಡಾ| ಅನುಸೂಯ ಸಾಲಿಯಾನ್
ಸಂಚಾಲಕರು ವಧು-ವರಾನ್ವೇಷಣಾ ಸಮಿತಿ, ದೆವೇಂದ್ರ ಪೂಜಾರಿ, ಶ್ರೀಮತಿ ಬಾನುಮತಿ ಹರೀಶ್,
ಪದ್ಮರಾಜ್, ಮಹೇಶ್ಚಂದ್ರ, ಎನ್. ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಬೆಂಗಳೂರು ಬಿಲ್ಲವ ಸಂಘ,
ತಾರನಾಥ, ಬಿ.ಟಿ ಸಾಲಿಯಾನ್, ಭಾರತಿ ದಾಮೋದರ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

ಭಾರತಿ ಕುಂದರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಶ್ರೀಲತಾ ಗೋಪಾಲಕೃಷ್ಣ, ಶ್ರಿಮತಿ ಗಾಯತ್ರಿ ಇವರು ಪ್ರಾರ್ಥನೆ ನೆರವೇರಿಸಿದರು.
ಸಮಾವೇಶದಲ್ಲಿ ಒಟ್ಟು 488 ಜೋಡಿಗಳು ನೊಂದಾವಣೆ
ಗೊಂಡಿದ್ದು, ಇದರಲ್ಲಿ 400ಕ್ಕೂ ಮಿಕ್ಕಿ ವಧುಗಳು ಹಾಗೂ 100ಕ್ಕೂ ಮಿಕ್ಕಿ ವರರು
ನೋಂದಾಯಿಸಿದ್ದಾರೆ. ಜೋಡಿಗಳಿಗೆ ಪರಸ್ಪರ ಮಾತುಕತೆ ಹಾಗೂ ವಧು ವರರ ಕಡತ ಪರಿಶೀಲಿಸುವ
ಅವಕಾಶಗಳನ್ನು ಕಲ್ಪಿಸಲಾಗಿದೆ.














|