|
ಕರ್ನಾಟಕ ದರ್ಶನ ವತಿಯಿಂದ ಮಂಗಳೂರು ಹಾಗೂ ಉಡುಪಿ
ದರ್ಶನ

01.04,10
ಮಂಗಳೂರು : ಕರ್ನಾಟಕ ದರ್ಶನ ಮತ್ತು ಟೂರಿಸಂ ಸಂಸ್ಥೆಯ ವತಿಯಿಂದ ಮಂಗಳೂರು ಹಾಗೂ ಉಡುಪಿ
ಜಿಲ್ಲೆಗಳ ವ್ಯವಸ್ಥಿತ ಪ್ರವಾಸಗಳನ್ನು ಏಪ್ರಿಲ್ 2 ರಿಂದ ಆರಂಭಿಸಲಾಗುವುದು ಎಂದು
ಕರ್ನಾಟಕ
ದರ್ಶನ ಸಂಸ್ಥೆಯ ಮುಖ್ಯಸ್ಥರಾದ ಉಮೇಶ್ ಕರ್ಕೇರ
ನಿನ್ನೆ ಮಾರ್ಚ್ 31 ರಂದು ಮಂಗಳೂರು ಪ್ರೆಸ್
ಕ್ಲಬ್ಬಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹದಿನೈದು ವರ್ಷಗಳಿಂದ ಮುಂಬೈ ಹಾಗೂ ಮಂಗಳೂರು
ಉಡುಪಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಿದ ಸಂಸ್ಥೆ
ಈಗ ಜಿಲ್ಲೆಯ ಜನತೆಗೆ ಸ್ಥಳೀಯ ಪ್ರವಾಸದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದು ಅವರು
ಹೇಳಿದರು.
ಮಂಗಳೂರು ನಗರ ದರ್ಶನ ಅರ್ಧ ದಿನ ಹಾಗೂ ಪೂರ್ತಿ ದಿನ,
ಉಡುಪಿ ದರ್ಶನದಲ್ಲಿ ಸೈಂಟ್ ಮೇರೀಸ್ ದ್ವೀಪ, ಜಿಲ್ಲಾ ದರ್ಶನದಲ್ಲಿ ಕರಾವಳಿ ತೀರ್ಥ ದರ್ಶನ
ಗಳನ್ನು ನುರಿತ ಮಾರ್ಗದರ್ಶಿಗಳೊಂದಿಗೆ ಪ್ರವಾಸಿಗರಿಗೆ ತೋರಿಸಲಾಗುತ್ತದೆ, ಮುಂಬರುವ
ದಿನಗಳಲ್ಲಿ ಮಳೆಗಾಲ ದರ್ಶನ ಎಂಬ ಹೋಸ ಪ್ರವಾಸವನ್ನು ಕೈಗೊಳ್ಳಲು ಸಂಸ್ಥೆಯು ನಿರ್ಧರಿಸಿದೆ
ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ಚಂದ್ರ ಪ್ರವಾಸೋದ್ಯಮ ಇಲಾಖೆ
ಮಂಗಳೂರು, ಸುದೇಶ್ ಬಂಗೇರ, ಕರ್ನಾಟಕ
ದರ್ಶನ ಮತ್ತು ಟೂರಿಸಂನ ಮೆನೇಜರ್, ರಾಮಚಂದ್ರ ಪ್ರವಾಸಿ ಪ್ರವರ್ತಕರು ಪ್ರವಾಸೋದ್ಯಮ ಇಲಾಖೆ
ಮಂಗಳೂರು, ಪಿಯಶ್ ಕರ್ನಾಟಕ
ದರ್ಶನ ಮತ್ತು ಟೂರಿಸಂನ ಮೆನೇಜರ್, ರೋನಾಲ್ಡ್ ಟೂರ್ ಮ್ಯಾನೇಜರ್
ಕರ್ನಾಟಕ
ದರ್ಶನ ಮತ್ತು ಟೂರಿಸಂನ ಇವರು ಉಪಸ್ಥಿತರಿದ್ದರು.
|