|
ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ

09.03.10 : ಮುಂಬರುವ
ಐಪಿಎಲ್ ಕ್ರಿಕೆಟ್ ಆಟದ ವೇಳೆ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮದ್ಯ ಸರಬರಾಜು
ಮಾಡುವಂತಿಲ್ಲ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ್ ಬಿದರಿ ಕಟ್ಟಪ್ಪಣೆ
ಮಾಡಿದ್ದಾರೆ.ಹಾಗೊಂದು ಸಮಯ ಸ್ಟೇಡಿಯಂ ನಲ್ಲಿ ಮದ್ಯ ಸರಬರಾಜು ಮಾಡಿದೇ ಆದ ಪಕ್ಷದಲ್ಲಿ
ಸ್ಟೇಡಿಯಂ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಕೆಎಸ್ ಸಿಎ ಕ್ಲಬ್ ಹೌಸ್ ನಲ್ಲಿ ಮದ್ಯ ಸೇವಿಸಲು
ಇಚ್ಛಿಸುವವರು ಪಾನಗೋಷ್ಟಿ ಮಾಡಬಹುದು. ಇದೂ ಕೂಡ ಕ್ಲಬ್ಬಿನ ಸದಸ್ಯರು ಹಾಗೂ ಅವರ
ಅತಿಥಿಗಳಿಗಷ್ಟೇ ಸೀಮಿತ ಎಂದೂ ಅವರು ಷರತ್ತು ವಿಧಿಸಿದ್ದಾರೆ.
ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಕಾರ್ಪೋರೇಟ್
ಬಾಕ್ಸುಗಳಲ್ಲಿ ಮದ್ಯ, ಊಟ ಸರಬರಾಜಿಗೆ ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿದೆ. ಆಟ ನೋಡುತ್ತಾ
ಮಸ್ತಿ ಮಾಡಬಯಸುವ ಕ್ರಿಕೆಟ್ ಪ್ರೇಮಿಗಳ ಉತ್ಸಾಹಕ್ಕೆ ಶಂಕರ ಬಿದರಿ ಅವರ ಈ ಆದೇಶ ತಣ್ಣೀರು
ಎರಚುವುದು ಖಂಡಿತ. ಈ ಆದೇಶದಿಂದಾಗಿ ವಿಜಯ ಮಲ್ಯ ಅವರ ಕ್ರಿಕೆಟ್ ಹಬ್ಬಕ್ಕೆ, ಗೇಟ್
ಕಲೆಕ್ಷನ್ನಿಗೆ ಹೊಡೆತ ಬೀಳುವುದು ಖಚಿತ. ವಿಜಯ ಮಲ್ಯ ಅವರ ರಾಯಲ್ ಛಾಲೆಂಜರ್ಸ್ ತಂಡ (
RCB)ಒಟ್ಟು ಏಳು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತದೆ. |