|
ಮಹಿಳಾ ಜಾಗೃತಿ ಕಾನೂನು ಅರಿವು
ಕಾರ್ಯಕ್ರಮ

09.03.10 : ಪುತ್ತೂರು ತಾಲೂಕಿನ ಹಿರೆಬಂಡಾಡಿಯಲ್ಲಿ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಪುತ್ತೂರು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ,
ಜನಶಿಕ್ಷಣ ಟ್ರಸ್ಟ್, ಹಿರೇಬಂಡಾಡಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹಾಗೂ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ನಡೆದ ಈ ಮಹಿಳಾ ಜಾಗೃತಿ
ಸಮಾವೇಶವನ್ನು ಪಂಚಾಯತ್ ಅಧ್ಯಕ್ಷೆ ವೆಂಕಮ್ಮ ದೀಪ ಬೆಳಗಿಸಿ ಉದ್ಘಾಟಿಸಿದರು. ಜನಶಿಕ್ಷಣ
ಟ್ರಸ್ಟ್ನ ನಿರ್ದೇಶಕ ಕೃಷ್ಣ ಮೂಲ್ಯ ಮಹಿಳಾ
ಜಾಗೃತಿಯ ಅಗತ್ಯದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯವಾದಿಗಳಾದ ಭಾರತಿ ಮತ್ತು
ಗೀತರವರು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಮಹಿಳೆಯರ ಆಸ್ತಿ ಹಕ್ಕು, ಜೀವನಾಂಶ, ಗ್ರಾಹಕರ
ಹಕ್ಕು ಮತ್ತಿತರ ಮಹಿಳಾ ಪರ ಕಾನೂನು ಕಾಯಿದೆ, ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಸುಜಾತ, ಸ್ತ್ರೀಶಕ್ತಿ
ಗೊಂಚಲಿನ ಅಧ್ಯಕ್ಷೆ ರೆಹಮತ್, ಪಂಚಾಯತ್ ಸದಸ್ಯರಾದ ಚಂದ್ರಾವತಿ, ಕುಸುಮ ಸಂವಾದದಲ್ಲಿ
ಭಾಗವಹಸಿದರು. ಸಾಂತ್ವನ ಕೇಂದ್ರದ ಕೌನ್ಸಿಲರ್ ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ಅರುಣಾ
ಸ್ವಾಗತಿಸಿ, ಗಣೇಶ್ ವಂದಿಸಿದರು. ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ, ನೋಡಲ್ ಎನ್.ಜಿ.ಒ
ಸಂಯೋಜಕರಾದ ಗಣೇಶ್, ಸಮಾಜ ಕಾರ್ಯಕರ್ತರಾದ ಹರೀಶ, ಮಾಲತಿ, ಪದ್ಮಾವತಿ, ಹುಸೈನ್ ಹಾಗೂ
ಅಂಗನವಾಡಿ ಕಾರ್ಯ ಕರ್ತೆಯರು, ಸ್ವಸಹಾಯ ಸಂಘ,
ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
|