|
`ದಿ ಸೆಕೆಂಡ್ ಗೇರ್ '
ಧರ್ಮಸ್ಥಳದಲ್ಲಿ ಬಿಡುಗಡೆ.

10.03.10 : ರುಡ್ ಶೆಟ್ ಸಂಸ್ಥೆಗಳ ಕಾರ್ಯನಿರ್ವಾಹಕರಾದ
ಜಿ.ಕೆ. ಪ್ರಮೋದ್ ಬರೆದ `ದಿ ಸೆಕೆಂಡ್ ಗೇರ್ ' ಕಿರು ಉದ್ದಿಮೆ ಮತ್ತು ನಿರುದ್ಯೋಗಿಗಳ
ಸಮಸ್ಯೆಗಳ ಲೇಖನ ಪುಸ್ತಕವನ್ನು ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬುಧವಾರ
ಬಿಡುಗಡೆಗೊಳಿಸಿದರು.
ಆರ್ಥಿಕ ಹಿನ್ನಡೆ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಸಣ್ಣ
ಕೈಗಾರಿಕೆಗಳು ಬಹಳ ಸಂಕಷ್ಷದಲ್ಲಿದೆ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸರಕಾರ ಸಣ್ಣ
ಉದ್ಯಮಿಗಳಿಗೂ ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಪುಸ್ತಕ ಬಿಡುಗಡೆಮಾಡಿದ
ಬಳಿಕ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಹೇಳಿದರು.
ಪುಸ್ತಕ ವಿಮರ್ಶೆ ಮತ್ತು ಪುಸ್ತಕದ ಕಿರು ಪರಿಚಯವನ್ನು
ಹುಬ್ಬಳ್ಳಿಯ ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿ ಸೋಮಶೇಖರ್ ಮಾಹಿತಿ ನೀಡಿದರು.
ಲೇಖಕ ಜಿ.ಕೆ. ಪ್ರಮೋದ್, ರಡ್ ಸೆಟ್ ನಿರ್ದೇಶಕ ಕೆ.ಎನ್.
ಜನಾರ್ಧನ್, ಪ್ರೋ. ಎಸ್. ಪ್ರಭಾಕರ್ ಮತ್ತು ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು. |