|
ಅನುದಾನಿತ ಐಟಿಐ ಸಿಬ್ಬಂದಿಗಳ ಮತ್ತು
ವಿದ್ಯಾರ್ಥಿಗಳ ಪ್ರತಿಭಟನೆ

11.03.10
ಮಂಗಳೂರು :ದ.ಕ.ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳ ಖಾಸಗಿ ಐಟಿಐ ಆಡಳಿತ ಮಂಡಳಿಗಳು,
ಪ್ರಾಂಶುಪಾಲರುಗಳು, ನೌಕರರು ಮತ್ತು
ವಿದ್ಯಾರ್ಥಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮಂಗಳೂರು ಜಿಲ್ಲಾಧಿಕಾರಿ ಕಛೇರಿ
ಎದುರು ಇಂದು ಬೆಳಿಗ್ಗೆ ಧರಣಿ ಸತ್ಯಾಗ್ರಹ ನಡೆಸಿದರು.

ಕಳೆದ 25 ವರ್ಷಗಳಿಂದ ಸುಧೀರ್ಘ ಸೇವೆ ಹಾಗೂ ವೃತ್ತಿ
ನಿಷ್ಟ ಕಾರ್ಯವೈಖರಿಯಿಂದ, ಪ್ರತಿ ಶೈಕ್ಷಣಿಕ ವರ್ಷದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ
ಉತ್ತಮ ಫಲಿತಾಂಶದೊಂದಿಗೆ, ಜಿಲ್ಲೆಯ ಆರ್ಥಿಕವಾಗಿ
ಮತ್ತು ಶೈಕ್ಷಣಿಕವಾಗಿ ಹಿಂದುಳಿದ
ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶ್ರಮ
ವಹಿಸುತ್ತಿವೆ ಎಂದು ಮಂಗಳೂರು ಶಿಕ್ಷಣ ಕ್ಷೇತ್ರದ ಮಾಜಿ ಎಂ.ಎಲ್.ಸಿ, ಬಾಲಕೃಷ್ಣ ಭಟ್ ಹೇಳಿದರು.
ನಾನು ಇವತ್ತು ಆಡಳಿತ ಪಕ್ಷದ ಪರವಾಗಿ ಬಂದಿದ್ದೇನೆ,
ಐಟಿಐ ಗಳಲ್ಲಿ ದುಡಿಯುತ್ತಿರುವ ನೌಕರರಿಗೆ, ಹಿರಿಯ ಅಧಿಕಾರಿಗಳಿಗೆ ಪಿಂಚಣಿ, ಸೇವಾ ಹಿರಿತನ
ಮೊದಲಾದ ಸವಲತ್ತುಗಳನ್ನು ಜಾರಿಗೊಳಿಸುವಂತೆ ಸರಕಾರದ ಗಮನಕ್ಕೆ ತರುವುದಾಗಿ ಅವರು ಹೇಳಿದರು.
ಪ್ರತಿಭಟನೆಯಲ್ಲಿ ವೈ.ಎನ್. ಸಾಲಿಯಾನ್ ರಾಮಕೃಷ್ಣ ಪೂಂಜಾ
ಐಟಿಐ ಮೂಲ್ಕಿ, ಪ್ರಶಾಂತ್ ನಾಯಕ್ ಕೆ. ಮಹಾಲಿಂಗೇಶ್ವರ ಐಟಿಸಿ ಪುತ್ತೂರು, ಗೋಪಾಲಕೃಷ್ಣ ಬಿ.
ಮಂಗಳೂರು, ಚಂದ್ರಹಾಸ ನಾರಾಯಣ ಗುರು ಐಟಿಐ ಕುದ್ರೋಳಿ, ಗಿಲ್ಬರ್ಟ ಬ್ರಿಗಾಂಜ ಮಂಗಳೂರು ಅಲ್ಲದೆ
ದ.ಕ ಮತ್ತು ಉಡುಪಿ ಜಿಲ್ಲೆಗಳ 1300 ಮಂದಿ
ವಿದ್ಯಾರ್ಥಿಗಳು, ಐಟಿಐ ಪ್ರಾಂಶುಪಾಲರು ಮತ್ತು ನೌಕರರು ಪಾಲ್ಗೊಂಡಿದ್ದರು.








|