ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ "ಆಸ್ಟಿಯಮ್"-2010

12.03.10 : ಮಂಗಳೂರು : ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಆರನೇ ಘಟಿಕೋತ್ಸವ "ಆಟಿಯಮ್"-2010 ನವದೆಹಲಿಯ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ನ ಅಧ್ಯಕ್ಷ ಪ್ರೊ.ಪಿ.ಕೆ.ದಾವೆ ಉದ್ಘಾಟಿಸಿದರು,

ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಪಡೆಯುವುದರಿಂದ ಪದವೀಧರರು ಎಂಬುದನ್ನು ಸಾಬೀತು ಪಡಿಸುವುದರ ಜತೆಗೆ ಆ ಪದವಿ ಅವರನ್ನು ವೃತ್ತಿಪರರನ್ನಾಗಿಸುತ್ತದೆ ಎಂದು ಪ್ರೊ.ಪಿ.ಕೆ.ದಾವೆ ಹೇಳಿದರು. ಅವರು ವೈದ್ಯಕೀಯ ಪದವೀಧರರಿಗೆ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಪದವಿ ಪಡೆಯುವುದಕ್ಕೆ ಕಠಿಣ ಶ್ರಮ ಪಡುವುದು ವಿದ್ಯಾರ್ಥಿಗಳು ಮುಂದಕ್ಕೆ ಒಬ್ಬ ಉತ್ತಮ ವೈದ್ಯ ಎಂದು ನಿರೂಪಿಸಲು ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸುವ ಕಡೆಗೆ ಪ್ರಾಮುಖ್ಯತೆ ನೀಡುವುದು ಮುಖ್ಯ. ಆಧುನಿಕ ಜಗತ್ತು ಸ್ಪರ್ಧಾತ್ಮಕವಾಗಿದ್ದು ಉತ್ತಮ ವೈದ್ಯರಿಗೆ ಮೊದಲ ಪ್ರಾಶಸ್ತ್ಯವಿದೆ. ಈ ನಿಟ್ಟಿನಲ್ಲಿ ಪದವೀಧರರು ಕೇವಲ ಪದವಿಗೆ ತೃಪ್ತರಾಗದೆ ಉನ್ನತ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯೆನೆಪೋಯ ವಿವಿಯ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಮಾತನಾಡಿ ಪದವೀಧರರ ಮುಂದಿನ ಉನ್ನತ ಶಿಕ್ಷಣಕ್ಕೆ ಯೆನೆಪೋಯ ವಿವಿಯಲ್ಲಿ ಸದಾ ಸ್ವಾಗತವಿದೆ ಎಂದರು.

ಶೈಕ್ಷಣಿಕವಾಗಿ ಸಾಧಿಸಲು ಹೊರಟ ವಿದ್ಯಾರ್ಥಿಗಳಿಗೆ ಯೆನೆಪೋಯ ವಿವಿಯಲ್ಲಿ ಸದಾ ಅವಕಾಶ ವಿದೆ. ಅದನ್ನು ಸಮರ್ಥವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪೋಷಕರ ಕನಸನ್ನು ನನಸು ಮಾಡಿ ಅವರಲ್ಲಿ ಸಾರ್ಥಕತೆ ಮೂಡಿಸಿದ್ದೀರಿ ಎಂದು ಉಪಕುಲಪತಿ ಪ್ರೊ.ಸಯ್ಯಿದ್ ಅಖೀಲ್ ಅಹ್ಮದ್ ಹೇಳಿದರು.

ಇದೇ ಸಂದರ್ಭ 2004ರ ಬ್ಯಾಚಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಡಾ.ಪೂಜಾ ದೊಡ್ಡಿಕೊಪ್ಪಾಡ್ ಅವರಿಗೆ ಜುಲೈಕಾ ಸ್ಮರಣಾರ್ಥ ಬಂಗಾರದ ಪದಕವನ್ನುಯೆನೆಪೋಯ ಅಬ್ದುಲ್ಲ ಕುಂಞಿ ನೀಡಿ ಗೌರವಿಸಿದರು.

ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗುಲಾಂ ಜೀಲಾನಿ ಖಾದಿರಿ ಸ್ವಾಗತಿಸಿದರು. ಡಾ.ವೀಣಾ ವಾಸ್ವಾನಿ ಪದವೀಧರರ ಹೆಸರು ವಾಚಿಸಿದರು. ಡಾ.ನೀಲಂ ಪುತ್ರನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಗೈದರು. ಪ್ರೊ.ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಯೆನೆಪೋಯ ವಿವಿ ರಿಜಿಸ್ಟ್ರಾರ್ ಡಾ.ಜನಾರ್ದನ್, ಯೆನೆಪೋಯ ಗ್ರೂಪ್ನ ಚೇರ್ಮೆನ್ ವೈ.ಮಹಮ್ಮದ್ ಕುಂಞಿ, ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಟ್ರಸ್ಟಿಗಳಾದ ಅಬ್ದುಲ್ಲ ಜಾವೀದ್, ಮೊಹಿದ್ದಿನ್ ರಿಜ್ವಾನ್, ಖಾಲಿದ್ ಬಾವಾ, ವೈದ್ಯಕೀಯ ಅಧೀಕ್ಷಕ ಡಾ.ಮೂಸಾ, ಪರೀಕ್ಷಾಂಗ ಕುಲಸಚಿವ ಡಾ.ಶಂಕರ್ ಭಟ್, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್.ಶ್ರೀಪತಿ ರಾವ್ ಉಪಸ್ಥಿತರಿದ್ದರು.
 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಅನುದಾನಿತ ಐಟಿಐ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ


ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು


16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ   "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ" ಬಿಡುಗಡೆ


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


ನಿರಂತರ ವಿದ್ಯುತ್ ಒದಗಿಸಲು

ಸಿಪಿಐಎಂ ಧರಣಿ


ಮಹಿಳೆಯರ ಸಶಕ್ತತೆಗೆ ಸಾಮೂಹಿಕ ಪ್ರಯತ್ನ ಅಗತ್ಯ - ರೋಹಿಣಿ


ಉಳ್ಳಾಲದಲ್ಲಿ ಗೇರು ಮೇಳ-2010 ಉದ್ಘಾಟನೆ

Type Your Comments



© Copyright www.megamedianews.com  All Rights Reserved