ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ

14.03.10 ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇವರ ಜಂಟಿ ಆಶ್ರಯದಲ್ಲಿ ಶನಿವಾರ ಮಾರ್ಚ್ 13ರ ಸಂಜೆ ಮಂಗಳೂರು ಕುಡ್ಲ ಕೋರ್ಟ್ ನ ಸಭಾಂಗಣದಲ್ಲಿ ಮಂಗಳೂರಿನ ಗುರುಕಿರಣ್ ರವರಿಗೆ ಕನ್ನಡ ಚಿತ್ರೋದ್ಯಮದ ಸಂಗೀತ ಕ್ಷೇತ್ರದಲ್ಲಿ ಮಾಡಿದ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ವಂದನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಗುರುಕಿರಣ್ ನಾನು ನನ್ನ ಸಂಗೀತ ಜೀವನವನ್ನು ಆರಂಭಿಸಿದ್ದೇ ಈ ನೆಲದಿಂದ. ನನ್ನ ಯಾವುದೇ ಸಾಧನೆ ಮಾಡಿದರೂ ಅದರ ಋಣ ನನ್ನ ತಾಯಿನೆಲಕ್ಕೆ ಸಲ್ಲಬೇಕು ಎಂದು ಅವರು ಹೇಳಿದರು.

ಪ್ರಶಸ್ತಿಯನ್ನು ಪ್ರದಾನ ಮಾಡಿದ ಉಸ್ತುವಾರಿ ಸಚಿವ ಜೆ. ಕೃಷ್ಣಪಾಲೇಮಾರ್ ಮಾತನಾಡಿ ಗುರುಕಿರಣ್ ರಂಥವರ ಸಾಧನೆಯ ಛಲವನ್ನು ರೂಢಿಸಿಕೊಂಡರೆ ನಾವು ಸಾಧಿಸಿ ಬೇಕಾದುದರಲ್ಲಿ ಯಶಸ್ಸುಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವರು ಹೇಳಿದರು. ಸಮಯ ವ್ಯರ್ಥ ಮಾಡದೆ ಜೀವನದಲ್ಲಿ ಏನನ್ನಾದರೂ ಸಾಧಿಸ ಬಹುದು ಎಂಬುದನ್ನು ಗುರುಕಿರಣ್ ತೋರಿಸಿ ಕೊಟ್ಟಿದ್ದಾರೆ, ಪ್ರಶಸ್ತಿ ಸ್ವೀಕರಿಸಿದ ಅವರ ಭವಿಷ್ಯ ಉಜ್ವಲವಾಗಲೆಂದು ನನ್ನ ಹಾರೈಕೆ ಎಂದು ಅವರು ನುಡಿದರು.

ಪ್ರಶಸ್ತಿ ಸಮಾರಂಭದಲ್ಲಿ ರೊಟೇರಿಯನ್ ಹರೀಶ್ ಅಡ್ಯಾರ್, ರೊಟೇರಿಯನ್ ಡಾ| ದೇವದಾಸ್ ರೈ, ರೊಟೇರಿಯನ್ ಸೂರ್ಯಪ್ರಕಾಶ್ ಭಟ್, ರೊಟೇರಿಯನ್ ಹೆರಮಾನ್ ಸಿ.ಜೆ. ಪಿರೇರಾ, ರೊಟೇರಿಯನ್ ದರ್ಶನ್ ಎ.ಡಿ. ಉಪಸ್ಥಿತರಿದ್ದರು.

 

 

 

 

 

 

 

 


ಇನ್ನಷ್ಟು ಸುದ್ದಿಗಳು  

ಹಿಂದಿನ ಸುದ್ದಿಗಳು

 

 


 

Coastal Times video news


Anupama Monthly Magazine



Mega TV

 Videos Clip


Vinayaka Furniture

10-20%  Special Discount


 Search Engine Marketing & Optimization


ಸುದ್ದಿ ಮುಖ್ಯಾಂಶಗಳು


ಮಸ್ಲಿಮರಿಗೆ ಮೀಸಲಾತಿ ; ಸಾರ್ವಜನಿಕ ಸಭೆ


ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ "ಆಸ್ಟಿಯಮ್"-2010


ಬಂದರಿನಲ್ಲಿ ಸರಳವಿವಾಹ ಮತ್ತು ಸನ್ಮಾನ ಕಾರ್ಯಕ್ರಮ


ಅನುದಾನಿತ ಐಟಿಐ ಸಿಬ್ಬಂದಿಗಳ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ


ಕೊಲ್ಲೂರು ರಥದ ಚಕ್ರಕ್ಕೆ ಸಿಲುಕಿ ಭಕ್ತನ ಸಾವು


16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ   "ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮದ ಅಹ್ವಾನ ಪತ್ರಿಕೆ" ಬಿಡುಗಡೆ


ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.


ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ

ತೆರಿಗೆ ದರ


ಮಹಿಳಾ ಜಾಗೃತಿ

ಕಾನೂನು ಅರಿವು ಕಾರ್ಯಕ್ರಮ


ಐಪಿಎಲ್ ಕ್ರಿಕೆಟ್ : ಮಧ್ಯ ನಿಷೇದ


ಕೊಂಕಣಿ ಗಾನಕೋಗಿಲೆ

ವಿಲ್ಫಿ ರೆಬಿಂಬಸ್ ಇನ್ನಿಲ್ಲ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ

 ಆಮಂತ್ರಣ ಪತ್ರಿಕೆ ಬಿಡುಗಡೆ.


ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ,

ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ


ಬಿಬಿಎಂಪಿ ಚುನಾವಣೆ ಮಾರ್ಚ್ 28 ಕ್ಕೆ


ಕರಾವಳಿ ಕಾಲೇಜಿನಲ್ಲಿ "ಗಗನ್-2010"


ಆದರ್ಶ ಸಮಾಜ ಮತ್ತು ಪ್ರವಾದಿ ಮುಹಮ್ಮದ್ ರ ಜೀವನ : ವಿಚಾರ ಗೋಷ್ಠಿ


ರಾಜ್ಯ ಬಜೆಟ್ ಮುಖ್ಯಾಂಶಗಳು


ಕಿರುತೆರೆ ನಟ ಅನಿಲ್ ಕಾಮತ್ ನಿಧನ


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ


ರಾಷ್ಟ್ರ ಲಾಂಛನ ಬಳಸಲು ಮಾರ್ಗದರ್ಶನ


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Type Your Comments



© Copyright www.megamedianews.com  All Rights Reserved