|
`ಕಡಲ ತಡಿಯ ಮನೆ' ಅನಾವರಣ

14.03.10
ಮಂಗಳೂರು : ದಾಸಜನ, ಮಂಗಳೂರು ಇದರ ಆಶ್ರಯದಲ್ಲಿ ಲಡಾಯಿ ಪ್ರಕಾಶನ, ಗದಗ ಪ್ರಕಟಿಸಿರುವ ಡಾ|
ಸಬಿಹಾ ಭೂಮಿಗೌಡ ಅವರ ಕಥಾಸಂಕಲನ `ಕಡಲ ತಡಿಯ ಮನೆ' ಬಿಡುಗಡೆ ಸಮಾರಂಭವು ಮಂಗಳೂರು ವಿಶ್ವ
ವಿದ್ಯಾನಿಲಯ ಕಾಲೇಜಿನ ಡಾ| ಶಿವರಾಮ ಕಾರಂತ ಸಭಾಭವನದಲ್ಲಿ
ಮಾರ್ಚ್ 13ರ ಶನಿವಾರ ಸಂಜೆ 5.30ಕ್ಕೆ ನಡೆಯಿತು.
ಪುಸ್ತಕ ಅನಾವರಣವನ್ನು ಖ್ಯಾತ ಬರಹಗಾರ್ತಿ ಶ್ರಿಮತಿ
ವೈದೇಹಿ ನೆರವೇರಿಸಿದರು. ಬಿಡುಗಡೆಯನಂತರ ಪುಸ್ತಕದ ಬಗ್ಗೆ ತಮ್ಮ ಮಾತುಗಳಲ್ಲಿ ಪ್ರಶಂಶೆ
ವ್ಯಕ್ತ ಪಡಿಸಿದರು.

ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಬಿ.ಎ.
ವಿವೇಕ ರೈ ವಹಿಸಿದ್ದರು. ಸ್ವಾಗತ ಭಾಷಣವನ್ನು ಡಾ| ಸೂರ್ಯನಾರಾಯಣ ಇವರು ನೆರವೇರಿಸಿದರು.
ಕಥಾಸಂಕಲನದ ಲೇಖಕರಾದ ಡಾ| ಸಬಿಹಾ ಭೂಮಿ ಗೌಡ ಪ್ರಸ್ತಾವನೆ
ಮಾಡಿದರು. ಪ್ರಕಾಶಕರಾದ ಬಸವರಾಜ ಸೂಳೀಬಾವಿ ಕಥಾಸಂಕಲನದ ಬಗ್ಗೆ ತಮ್ಮ ಅನಿಸಿಕೆ ಗಳನ್ನು
ಹೇಳಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಡಾ|
ನಾ. ದಾಮೋದರ ಶೆಟ್ಟಿ ನಿರ್ವಹಿಸಿದರು.





 |