|
ನಗರದಲ್ಲಿ 108 ಅಂಬ್ಯುಲೆನ್ಸ್
ಸೌಲಭ್ಯ ಆರಂಭ

27.03.10 : ವೈದ್ಯರು, ಜೌಷಧಿ ಹಾಗೂ ತುರ್ತು ಚಿಕಿತ್ಸಾ
ವ್ಯವಸ್ಥೆಯಿರುವ 108 ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.
ಪಾಲೇಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಇಂದು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ
ಉದ್ಘಾಟಿಸಿದರು.

ಏಳು ಅಂಬುಲೆನ್ಸ್ ಗಳನ್ನು ನಗರದ ವಿವಿಧ ಕಡೆಗಳಿಂದ
ಬರುವ ಅಪಘಾತಗಳ ತುರ್ತು ಕರೆಗಳಿಗೆ ಸ್ಪಂಧಿಸಲು ಹಾಗೂ ಅಪಘಾತಗಳ ನಡೆದ ಕೂಡಲೇ ಆಗುವಂತಹ ರಕ್ತ
ಸ್ರಾವ ಹಾಗೂ ಜೀವಹಾನಿಯನ್ನು ತಪ್ಪಿಸಲು ವೈದ್ಯರು, ಜೌಷಧಿಗಳ ಸಿದ್ಧ ವ್ಯವಸ್ಥೆಯಿರುವುದರಿಂದ
ಈ ಸೌಲಭ್ಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಚಿವ ಕೃಷ್ಣ ಜೆ. ಪಾಲೇಮಾರ್ ಹೇಳಿದರು.
ಸದ್ಯದಲ್ಲೇ '104' ಸಂಚಾರಿ ವ್ಯವಸ್ಥೆ ಇರುವ ಆರೋಗ್ಯ
ಸೇವೆಯನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿ ಪೊನ್ನುರಾಜ್,
ಜಿಲ್ಲಾ ಪಂಚಾಯತ್ ಸಿಇಓ ಪಿ ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ| ಎಚ್ . ಜಗನ್ನಾಥ್ ಉಪಸ್ಥಿತರಿದ್ದರು.





|